Friday 13 January 2012

'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ - ಭಾಗ 2

ಚಿತ್ತಗಾಂಗ್ ನಲ್ಲಿ ಕ್ರಾಂತಿ ಯಶಸ್ವಿಯಾಗಿ  ನಡೆದು, ಕೊನೆಗೆ ಅದರ ಸಂಪೂರ್ಣ ರೂವಾರಿ ಸೂರ್ಯಸೇನ್ ಹುತಾತ್ಮನಾಗಿಹೋದ.
ಅದರ ಮಧ್ಯದ ಘಟನೆಗಳು ನಿಜಕ್ಕೂ ರೋಮಾಂಚಕಾರಿ ಮತ್ತು ಕುತೂಹಲಕಾರಿ..
ಇತಿಹಾಸದ ಗರ್ಭದಲ್ಲಿ ಅಡಗಿಹೋದ ಆ ಅದ್ಭುತ ಘಟನಾವಳಿಗಳನ್ನ ನಿಮ್ಮೊಡನೆ ಹಂಚಿಕೊಳ್ಳಲೇಬೇಕೆಂದು ಇನ್ನೆರಡು ಭಾಗಗಳಲ್ಲಿ  ಇಲ್ಲಿ ಹೊರತರುತ್ತಿದ್ದೇನೆ.
 
ಚಿತ್ತಗಾಂಗ್
                                    
ಚಿತ್ತಗಾಂಗ್ ನ ಹೋರಾಟ ನಡೆದದ್ದು ಎಪ್ರಿಲ್ 18 1930. ಪ್ಲಾನಿನಂತೆ ಎಲ್ಲ ಕೆಲಸಗಳು ಮುಗಿದ ಮೇಲೆ, ಕ್ರಾಂತಿಕಾರಿಗಳು ಜಲಾಲಬಾದ್ ಗುಡ್ಡದ ಮೇಲೆ ಅಡಗಿಕೊಂಡಿದ್ದ್ರು.
ಅದಾದ 4  ದಿನಗಳ ನಂತರ, ಅಂದ್ರೆ 22 ಏಪ್ರಿಲ್ 1930 , ಆ ಕ್ರಾಂತಿಕಾರಿಗಳ ಪಾಲಿಗೆ ಘೋರವಾಗಿತ್ತು.. ಕೆಲವು ತನಿಖೆಯ ಮೂಲಕ ಪೊಲೀಸರು ಕ್ರಾಂತಿಕಾರಿಗಳ ಇರುವಿಕೆಯನ್ನು ಪತ್ತೆ ಹಚ್ಚಿದ್ದರು. ಹೀಗಾಗಿ 80 ಸಶಸ್ತ್ರ ಪಡೆಯೊಂದಿಗೆ ಬ್ರಿಟಿಶ್ ಸೈನ್ಯ ಆ ಜಲಾಲಬಾದ್ ಗುಡ್ಡವನ್ನು ಸುತ್ತುವರೆಯಿತು.
4 ದಿನಗಳಿಂದ ಸರಿಯಾದ ಆಹಾರ ಇಲ್ಲದೆ,ನಿದ್ರೆ ಇಲ್ಲದೆ ದಣಿದು ಹೋಗಿದ್ದ ಆ ಯುವಕರಿಗೆ ಇದು ಮತ್ತೊಂದು ಸವಾಲಾಗಿ ಪರಿಣಮಿಸಿತ್ತು.. ದಣಿವಾಗಿದ್ದು ದೇಹಕ್ಕೆ, ದೇಶಭಕ್ತಿಗೆ ಅಲ್ವಲಾ..!!!!

ಸೇನಾಪತಿ ಲೋಕನಾಥ್ ಬಲ್ ನ ಆಜ್ನೆಯನ್ನನುಸರಿಸಿ ಎಲ್ಲ ವಿದ್ಯಾರ್ಥಿಗಳು ಯುದ್ಧಕ್ಕೆ ಸನ್ನದ್ಧರಾದರು.ಆ ಯುವಕರ ಹೆಸರು ಹೀಗಿವೆ..
೧)ಸುರೇಶ ದೇವ್           ೨)ವಿನೋದ್ ಚೌಧರಿ        ೩)ಜಿತೇಂದ್ರ ದಾಸ್ಗುಪ್ತ       ೪)ಶಂಭು ದಸ್ತಿದಾರ್
೫)ಕೃಷ್ಣ ಚೌಧರಿ             ೬)ಸರೋಜ ಗುಹ            ೭)ಮಲಿನ್ ಘೋಷ್          ೮)ಕಾಳಿಡೇ
೯)ಮಧುಸೂದನ್ ದತ್ತ    ೧೦)ನಾಣಿ ದೇವ್            ೧೧)ಖಿರೋದ್ ಬ್ಯಾನರ್ಜೀ   ೧೨)ಹಿಮೇಂದು ದಸ್ತಿದಾರ್
೧೩)ಕಾಳಿ ಚಕ್ರವರ್ತಿ      ೧೪)ಅರ್ಧೆಂದು ದಸ್ತಿದಾರ್   ೧೫)ರಣಧೀರ್ ದಾಸ್ಗುಪ್ತ     ೧೬)ಶ್ಯಾಮರಾಂ ದಾಸ್
೧೭)ಮೋತಿ ಕನುನ್ಗೋ   ೧೮)ವಿಧು ಭಟ್ಟಾಚಾರ್ಯ    ೧೯)ನಾರಾಯಣ್ ಸೇನ್     ೨೦)ಪುಲಿನ್ ವಿಕಾಸ್ ಘೋಷ್
೨೧)ಮಹೇಂದ್ರ ಚೌಧರಿ    ೨೨)ನಿರ್ಮಲ ಲಾಲ         ೨೩)ವೀರೇಂದ್ರ ಡೇ          ೨೪)ವಿಜಯ್ ಸೇನ್
೨೫)ನಿತ್ಯಪಾದ ಘೋಷ್   ೨೬)ಅಶ್ವಿನಿ ಚೌಧರಿ         ೨೭)ವನವಿಹಾರಿ ದತ್ತ         ೨೮)ಶಶಾಂಕ್ ದತ್ತ
೨೯)ಸುಬೋದ್ಹ್ ಪಾಲ್     ೩೦)ಫಣೀಂದ್ರ ನಂದಿ       ೩೧)ಹರಿಪಾದ ಮಹಾಜನ್    ೩೨)ಬಾಬುತೊಶ್ ಭಟ್ಟಾಚಾರ್ಯ
೩೩)ಸುಧಾಂಶು ಬೋಸ್   ೩೪)ಸುಬೋದ್ಹ್ ಚೌಧರಿ    ೩೫)ಬ್ರಿಗೇಡಿಯರ್ ತ್ರಿಪುರ ಸೇನ್
೩೬)ಮನೋರಂಜನ್ ಸೇನ್     ೩೭)ದೇವಪ್ರಸಾದ್ ಗುಪ್ತಾ   ೩೮)ಹರಿ ಬಲ್ (ಟೇಗ್ರ)
೩೯)ರಜತ್ ಸೇನ್   ೪೦)ಸ್ವದೇಶ್ ರೋಯ್    ೪೧)ವಿನೋದ್ ಬಿಹಾರಿ ದತ್ತ

ಈ ಎಲ್ಲ ಯುವಕರ ಹತ್ರ ಇದ್ದಿದ್ದು "ಮಸ್ಕೆತ್ರಿ" ರೈಫಲ್ ಗಳು..ಇವು ಸ್ವಲ್ಪ ಹಳೆ ಕಾಲದವು..
ಬ್ರಿಟಿಷರು ಗುಡ್ಡವನ್ನು ಸಮೀಪಿಸುತ್ತಿದ್ದಂತೆ, ಲೋಕನಾಥ್ ಆದೇಶ ನೀಡಿದ. ಕೂಡಲೇ ಯುವಕರ ಬಂದೂಕಿನಿಂದ ಗುಂಡುಗಳು ಹೊರಬಂದವು. ಬ್ರಿಟಿಷರಿಗೆ ದಿಗ್ಭ್ರಮೆಯಾಯಿತು.. ಅಲ್ಲಿನ ಯುವಕರ ರೌದ್ರರೂಪ ಆಗತಾನೆ ಅರ್ಥವಾಗಿತ್ತು ಅವರಿಗೆ.
ಬ್ರಿಟಿಷರೂ ಅತ್ಯಾಧುನಿಕ ವಿಕರ್ ಮಷಿನ್ ಗನ್ ಗಳಿಂದ ದಾಳಿ ನಡೆಸಿದರು..
 
"ಮಸ್ಕೆತ್ರಿ" ರೈಫಲ್
                                    
ವಿಕರ್ ಮಷಿನ್ ಗನ್
                              
ಆ ಹೋರಾಟದಲ್ಲಿ ಗುಂಡೊಂದು ಟೇಗ್ರಾನಿಗೆ ಬಡಿಯಿತು..ಬರೀ 14 ವರ್ಷದ ಆ ಪುಟ್ಟಪೋರ ಆ ಸಾವಿನಲ್ಲೂ ನಗುತ್ತ ಸಹಚರರಿಗೆ " ನಾನಿನ್ನು ಹೊರಟಿದ್ದೇನೆ.ನೀವು ನಿಲ್ಲಿಸಬೇಡಿ.ದಾಳಿ ಮುಂದುವರೆಯಲಿ" ಎನ್ನುತ್ತಲೇ ಹುತಾತ್ಮನಾದ..ಹೀಗೇ ಒಬ್ಬರ ಹಿಂದೊಬ್ಬರು ಅಸುನೀಗುತ್ತಾ ಹೋದರು.ಅಂಬಿಕಾ ಚಕ್ರವರ್ತಿಗೂ ಗುಂಡು ತಗುಲಿತು.

ಪರಿಸ್ಥಿತಿಯ ವಿಷಮತೆ ತಿಳಿದಾಕ್ಷಣ, ಸೇನಾಪತಿ ಲೋಕನಾಥ ಕೂಗಿದ, "ಗೆಳೆಯರೇ, ನಿಲ್ಲಬೇಡಿ, ಗೆಲ್ಲುವವರೆಗೂ ದಾಳಿ ಹಾಗೆ ಮುಂದುವರೆಯಲಿ" ಅಂತ. ಉತ್ತೇಜಿತಗೊಂಡ ಯುವಕರು, ದುಪ್ಪಟ್ಟು ಹುಮ್ಮಸ್ಸಿನಿಂದ ದಾಳಿ ನಡೆಸಿದರು.
ಕೊನೆಗೂ, ಪುಟ್ಟ ಬಾಲಕರು ಹಿಡಿದ ಹಳೆ ಕಾಲದ ಬಂದೂಕಿನ ಎದುರಿಗೆ, ದೊಡ್ಡ ಬ್ರಿಟಿಶ್ ಪಡೆಯ ಅತ್ಯಾಧುನಿಕ ಯಂತ್ರವೂ ಸೋಲೊಪ್ಪಿಕೊಂಡಿತು.. ಅದಾಗಲೇ ರಾತ್ರಿಯಾಗಿದ್ದರಿಂದ ಬ್ರಿಟಿಷರು ಅಲ್ಲಿರಲು ಸಾಧ್ಯವಾಗದೆ ಓಡಿ ಹೋದರು.. ಚಿತ್ತಗಾಂಗ್ ನ ಯುವಕರಿಗೆ ಮತ್ತೊಮ್ಮೆ ವಿಜಯ ಒಲಿದಿತ್ತು..

ಕೂಡಲೇ, ಕ್ರಾಂತಿಕಾರಿಗಳೂ ಬೆಟ್ಟವನ್ನು ಇಳಿದು ಬೇರೆ ಜಾಗಗಳಿಗೆ ಗುಂಪುಗುಂಪಾಗಿ ಚದುರಿಹೋದರು..
ಇಡೀ ಹೋರಾಟದಲ್ಲಿ ಒಟ್ಟು 12 ಜನ ಹುತಾತ್ಮರಾದರು. 11 ವಿದ್ಯಾರ್ಥಿಗಳು ಸ್ಥಳದಲ್ಲೇ ಅಸುನೀಗಿದರೆ, ಅರ್ಧೆಂದು ದಸ್ತಿದಾರ್ ಆಸ್ಪತ್ರೆಯಲ್ಲಿ ಮರಣಹೊಂದಿದ..
ಅಂಬಿಕಾ ಚಕ್ರವರ್ತಿಗೆ ಗುಂಡು ಬಡಿದಿದ್ದರಿಂದ ಅವನನ್ನು ಅಲ್ಲೇ ಬಿಟ್ಟು ಹೊರಟುಹೋದರು. ಆದರೆ ಅವನು ಇನ್ನೂ ಬದುಕಿದ್ದ..!!! ಹೇಗೋ ಆನಂತರ ತಲೆಮರೆಸಿಕೊಂಡ..!!!

ಇತ್ತ ಓಡಿ ಹೋದ ಯುವಕರಲ್ಲಿ ಕೆಲವರು ಬ್ರಿಟಿಷರಿಂದ ಬಂಧಿತರಾದರು.ಕೆಲವರು ತಾವು ಬ್ರಿಟಿಷರ ಕೈಗೆ ಸಿಕ್ಕು ಗುಲಾಮರಾಗಬಾರದೆಂದು ತಮಗೆ ತಾವೇ ಗುಂಡು ಹೊಡೆದುಕೊಂಡು ಪ್ರಾಣಾರ್ಪಣೆ ಮಾಡಿಕೊಂಡರು.ಇನ್ನು ಕೆಲವರು ಹಾಗೆಯೇ ತಮ್ಮ ತಮ್ಮ ಊರನ್ನು ಸೇರಿಕೊಂಡುಬಿಟ್ಟರು.. ಅದೇನೇ ಇರಲಿ, ಒಟ್ಟಿನಲ್ಲಿ ಆ ಎಲ್ಲರೂ, ತಾಯಿ ಭಾರತಿಗೆ ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದರು..!!!!!

ಸೂರ್ಯಸೇನ್, ನಿರ್ಮಲ್ ಸೇನ್ ಮತ್ತು ಪ್ರೀತಿಲತಾ ಗುಟ್ಟಾಗಿ ಒಬ್ಬ ವಿಧವೆಯ ಮನೆಯಲ್ಲಿ ಆಶ್ರಯ ಪಡೆದರು.. ಆದರೆ ಅದೂ ಹೇಗೋ ಆಂಗ್ಲರಿಗೆ ಗೊತ್ತಾಗಿ, ಕೂಡಲೇ ಬ್ರಿಟಿಷರು ಕಾರ್ಯೋನ್ಮುಖರಾದರು.. ದೊಡ್ಡ ಪಡೆಯೇ ಆ ಮನೆಯನ್ನು ಆವರಿಸಿ, ದಾಳಿ ನಡೆಸಲಾಯಿತು.. ಒಳಗಿದ್ದ ಕ್ರಾಂತಿಕಾರಿಗಳೂ ಪ್ರತಿದಾಳಿ ನಡೆಸಿದರು.ಆದರೆ, ಈ ದಾಳಿಯ ಬಗ್ಗೆ ಪೂರ್ವತಯಾರಿ ಇಲ್ಲದೆ ಇದ್ದಿದ್ದರಿಂದ ಕ್ರಾಂತಿಕಾರಿಗಳಿಗೆ ದಾಳಿ ಮಾಡೋದು ಕಷ್ಟವಾಯಿತು.. ಆ ಹೋರಾಟದಲ್ಲಿ ನಿರಂತರ ಗುಂಡಿನ ಹೊಡೆತಕ್ಕೆ ಸಿಲುಕಿ ನಿರ್ಮಲ್ ಸೇನ್ ಹುತಾತ್ಮನಾದ..
ಆದರೆ, ಸೂರ್ಯಸೇನ್ ಮತ್ತು ಪ್ರೀತಿಲತಾ ತಪ್ಪಿಸಿಕೊಂಡರು..!!

ಸೂರ್ಯಸೇನ್, ಎಷ್ಟೋ ದಿನ ಬ್ರಿಟಿಷರಿಗೆ ಸಿಂಹಸ್ವಾಪ್ನವಾಗಿಯೇ ಉಳಿದಿದ್ದ.. ಆದರೆ ದೇಶದ್ರೋಹಿಯೊಬ್ಬ ಅವನ ಇರುವಿಕೆಯ ಸುಳಿವು ಕೊಟ್ಟಕ್ಷಣ, ಬ್ರಿಟಿಷರು ಸೂರ್ಯಸೆನನನ್ನು ಬಂಧಿಸಿಬಿಟ್ಟರು..!!
ಜೊತೆಗೆ, ಒಬ್ಬ ಕ್ರಾಂತಿಕಾರಿ ಆ ದ್ರೋಹಿಯನ್ನೂ ಕೊಂದುಬಿಟ್ಟ..ಆದರೆ ಆ ಕ್ರಾಂತಿಕಾರಿ ಯಾರು ಅಂತ ಕಡೆಗೂ ಪೊಲೀಸರಿಗೆ ಗೊತ್ತಾಗ್ಲಿಲ್ಲ..ಯಾಕಂದ್ರೆ, ಕೊಲೆಯಾದ ನೇತ್ರಸೇನನ ಹೆಂಡತಿ ಸೂರ್ಯಸೆನನನ್ನು ಅಪಾರವಾಗಿ ಗೌರವಿಸುತ್ತಿದ್ದಳು.ಹೀಗಾಗಿ ತನ್ನ ಗಂಡ ದುಡ್ಡಿಗಾಗಿ ಮಾಡಿದ ನಾಡದ್ರೋಹಕ್ಕೆ ಅವಳೂ ತಪ್ತಳಾಗಿದ್ದಳು. ಪೊಲೀಸರು ಆಕೆಯನ್ನು ಎಷ್ಟೇ ಹಿಮ್ಸಿಸಿದರೂ, ತನ್ನ ಪತಿಯ ಕೊಲೆ ಮಾಡಿದವನ ಹೆಸರನ್ನ ಆಕೆ ಹೇಳಲೇ ಇಲ್ಲ.. ಇಂತಹ ಸ್ತ್ರೀಯರಿಂದಲೇ ಭಾರತ ಇನ್ನೂ ಉಸಿರಾಡುತ್ತಿದೆ..!!!!

ಮತ್ತೊಬ್ಬ ನಾಯಕ ಗಣೇಶ್ ಘೋಷ್ ನನ್ನು ಬಂಧಿಸಲಾಯಿತು.ಅವನ ವಿಚಾರಣೆಯೂ ನಡೆದು, ಅವನಿಗೆ ಅಂಡಮಾನಿನ ಭಯಾನಕ "ಕರಿನೀರಿನ"ಶಿಕ್ಷೆಗೆ ಗುರಿಮಾಡಲಾಯಿತು..

ಇಷ್ಟೆಲ್ಲದರ ನಡುವೆ, ಅನಂತ, ಲೋಕನಾಥ,ಕಲ್ಪನಾ ಏನಾದ್ರು..????
ಬಾಲಕ ಹರಿಪಾದ ಮಹಾಜನ್ ಎಲ್ಲಿ ಅಡಗಿದ್ದ..?????!!!!

[ಮುಂದಿನ ಭಾಗದಲ್ಲಿ]


[ ಉಳಿದೆರಡು ಭಾಗಗಳು,
ಭಾಗ-೧ - "ಚಿತ್ತಗಾಂಗ್"ನಲ್ಲೊಂದು ಸ್ವಾತಂತ್ರ್ಯ"ಸೂರ್ಯ"ನ ಉದಯ..ಭಾಗ-೧
ಭಾಗ-೩ -  "ಚಿತ್ತಗಾಂಗ್"ನಲ್ಲೊಂದು ಸ್ವಾತಂತ್ರ್ಯ"ಸೂರ್ಯ"ನ ಉದಯ..ಭಾಗ-೩


(ಚಿತ್ರಕೃಪೆ -- http://shantigrouprealhistory.blogspot.com )
 

No comments:

Post a Comment