Thursday 22 December 2011

ಇವರನ್ನು ಮರೆಯಲಾದೀತೇ..?!!!!

ಅವತ್ತು ಬೆಳಿಗ್ಗೆ ಅವನು, ಸ್ನಾನ ಮಾಡಿ ಶುದ್ಧನಾದ.. "ಇಂದ್ರಸ್ತ್ವಂ ರುದ್ರಸ್ತ್ವಂ ವಿಷ್ಣುಸ್ತ್ವಂ" ಎಂದು ಮಂತ್ರ ಹೇಳುತ್ತಿದ್ದ.
ಕೂಡಲೇ ಬಂದ ಬ್ರಿಟಿಶ್ ಅಧಿಕಾರಿ, 'ಹೊತ್ತಾಯಿತು ನಡೆ' ಅಂದ..
ನಗುತ್ತಲೇ, ಗಲ್ಲಿನ ಕಂಬದೆಡೆಗೆ ಆತ ನಡೆದ.
ನೇಣು ಕುಣಿಕೆಯ ಎದುರು ನಿಂತಾಗಲೂ ಅವನ ನಗು ಮಾಸಲಿಲ್ಲ.
ಅಧಿಕಾರಿ ಕೇಳಿದ, 'ರಾಮ್' ಇನ್ನೇನು ನಿನ್ನ ಸಾವಾಗುತ್ತೆ.. ಕೊನೆಯಾಸೆ ಏನು? ಅಂತ..
ರಾಮ ಅಧಿಕಾರಿಯ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ.,
"ನೈನಂ ಛಿನ್ದನ್ತಿ ಶಸ್ತ್ರಾಣಿ
ನೈನಂ ದಹತಿ ಪಾವಕಃ
ನ ಚೈನಂ ಕ್ಲೇದಯಂತ್ಯಾಪೋ
ನ ಶೋಷಯತಿ ಮಾರುತಃ.."
"ನೀವು ಕೇವಲ 'ರಾಮ'ನ ದೇಹವನ್ನು ಸಾಯಿಸಬಹುದು. 'ರಾಮ'ನ ಆತ್ಮವನ್ನಲ್ಲ.. ನನ್ನ ಆದರ್ಶಗಳನ್ನಲ್ಲ.
ನನ್ನ ತಾಯಿಯ ಬಿಡುಗಡೆಯಾಗುವವರೆಗೂ, ನನ್ನ ಆತ್ಮ ಮತ್ತೆ ಮತ್ತೆ ಹುಟ್ಟಿ ಬರುತ್ತಲೇ ಇರುತ್ತದೆ" ಅಂತ ಆ ಬಿಸ್ಮಿಲ್ ಹೇಳುತ್ತಿದ್ದಂತೆ, ಅಧಿಕಾರಿಯೇ ಬೆವೆತು ಹೋದ..

ರಾಮ್ ಪ್ರಸಾದ್ ಬಿಸ್ಮಿಲ್
ಅಶ್ಫಾಕ್ ಉಲ್ಲಾ ಖಾನ್
ರಾಜೇಂದ್ರ ಲಾಹಿರಿ
ರೋಶನ್ ಸಿಂಗ್
                                                                                                     



ಕಾಕೋರಿ ಪ್ರಕರಣದಲ್ಲಿ, ಬಹುತೇಕ 40 ಮಂದಿ, HRA ಸಂಘಟನೆಯ ಕ್ರಾಂತಿಕಾರಿಗಳು ಸಿಕ್ಕಿಬಿದ್ದು ಅವರಿಗೆಲ್ಲಾ ವಿವಿಧ ಶಿಕ್ಷೆಗಳಾದ್ವ. ಅದ್ರಲ್ಲಿ ನಾಲ್ಕು ಜನರಿಗೆ ಗಲ್ಲು ಶಿಕ್ಷೆ..
ರಾಮ್ ಪ್ರಸಾದ್ ಬಿಸ್ಮಿಲ್
ರಾಜೇಂದ್ರ ಲಾಹಿರಿ
ರೋಶನ್ ಸಿಂಗ್
ಅಶ್ಫಾಕ್ ಉಲ್ಲಾ ಖಾನ್..

ರಾಮ್, ಅಶ್ಫಾಕ್ ಮತ್ತು ರೋಶನ್ ಸಿಂಗ್ ಎಲ್ಲರೂ ಷಹಜಹಾನ್ ಪುರದವರೇ..
ರಾಮ್ ಮತ್ತು ರೋಶನ್, 'ಆರ್ಯಸಮಾಜ'ದ ನಿಷ್ಠಾವಂತ ಕಾರ್ಯಕರ್ತರು..
ಆನಂತರ ಅಷ್ಪ್ಹಾಕನೂ ಅವರೊಟ್ಟಿಗೆ ಸೇರಿಕೊಂಡ.

ರಾಜೇಂದ್ರ ಲಾಹಿರಿ ಬಂಗಾಳದ ಯುವಕ, M.A ಪದವೀಧರ. ಅವನಣ್ಣ, ಕಾಶಿಯಲ್ಲಿ ಒಂದು ಹೋಮಿಯೋಪತಿ ಔಷಧಾಲಯ ಇಟ್ಟುಕೊಂಡಿದ್ದ.. ಅಲ್ಲಿಯೇ, ಶಚಿಂದ್ರನಾಥ್ ಸನ್ಯಾಲ್ ಮತ್ತಿತರು ಸೇರಿ ಪ್ರಸಿದ್ಧ "ಹಿಂದುಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್" ಪ್ರಾರಂಭಿಸಿದ್ದು.. ಅಲ್ಲಿಯೇ ಆಜಾದನ ಜೊತೆ ಇವನೂ ಸೇರಿಕೊಂಡ.
ಕಾಕೊರಿಯಲ್ಲಿ ಇವರೆಲ್ಲರ ಕಾರ್ಯ ಅದೆಂಥಾದ್ದು ಅನ್ನೋದು ವಿದಿತ ಸಂಗತಿಯೇ..

ಅವರೆಲ್ಲ ನಗುನಗುತ್ತಲೇ ಉರುಳಿಗೆ ಕೊರಳಿತ್ತರು.
ಡಿಸೆಂಬರ್ 17 - ರಾಜೇಂದ್ರ ಲಾಹಿರಿ ಮೃತನಾದ..
ಡಿಸೆಂಬರ್ 19 - ರಾಮ್ ಪ್ರಸಾದ್ ಮತ್ತು ಅಶ್ಫಾಕ್ ಬೇರೆ ಬೇರೆ ಜೈಲಿನಲ್ಲಿ ನೇಣಿಗೇರಿದರು.
ಡಿಸೆಂಬರ್ 20 - ರೋಶನ್ ಸಿಂಗ್ ಗಲ್ಲಿಗೇರಿದ..

ನಾಲ್ವರು ಅಪ್ಪಟ ಸ್ನೇಹಿತರು, ದೇಶಭಕ್ತರು, ಸಾವಿನಲ್ಲೂ ಒಂದಾಗಿದ್ದರು..

ಬಿಸ್ಮಿಲ್, ಜೈಲಿನಲ್ಲಿ ಕೂತು ಒಂದು ಪದ್ಯ ಬರೆದಿದ್ದ..
"ಮರತೆ ಬಿಸ್ಮಿಲ್,ರೋಶನ್,ಲಾಹಿರಿ
ಅಶ್ಫಾಕ್ ಅತ್ಯಾಚಾರ ಸೆ..
ಹೋಂಗೆ ಪೈದಾ ಸೈಕಡೋ
ಉನ್ಕೆ ರುಧಿರ್ ಧಾರ್ ಸೆ.."

ಅವನಾಡಿದ್ದ ಮಾತು, ನಿಜವಾಯಿತು. ಅಸಂಖ್ಯಾತ ತರುಣರು ಮೇಲೆದ್ದು ಭಾರತಿಯನ್ನು ಸ್ವತಂತ್ರಗೊಳಿಸಿದರು..

ಆದರೆ ಅವನ ಮಾತು, ಮತ್ತೊಮ್ಮೆ ಸತ್ಯವಾಗಬೇಕಿದೆ. ನಮ್ಮೆಲ್ಲರ ಹೃದಯದಲ್ಲಿ ಆ ಎಲ್ಲ ಕ್ರಾಂತಿಕಾರಿಗಳ ಪುನಶ್ಚೇತನ ಮಾಡಬೇಕಿದೆ..
ಆ ಎಲ್ಲ ಹುತಾತ್ಮರಿಗೂ ಭಾವಪೂರ್ಣ ನಮನ..

ವಂದೇ ಮಾತರಂ..

No comments:

Post a Comment